ಯಕ್ಷಗಾನ ಪುನರುಜ್ಜೀವನಕ್ಕಾಗಿ ಮೇಳಗಳ ತಿರುಗಾಟ
ಲೇಖಕರು : ಸತೀಶ್ ನಾಯಕ್ , ಪಕಳಕು೦ಜ
ಮ೦ಗಳವಾರ, ನವ೦ಬರ್ 19 , 2013
|
ನವ೦ಬರ್ 19 , 2013
|
ಯಕ್ಷಗಾನ ಪುನರುಜ್ಜೀವನಕ್ಕಾಗಿ ಮೇಳಗಳ ತಿರುಗಾಟ
ವಿಟ್ಲ :
ಸಾವಿರಾರು ಜನರ ಮನಃಸಂತೋಷಕ್ಕಾಗಿ ಮೇಳದ ಸ್ಥಾಪನೆಯಾಗಿದೆ. ಯಕ್ಷಗಾನ ಪುನರುಜ್ಜೀವನಕ್ಕಾಗಿ ಮೇಳ ತಿರುಗಾಟ ನಡೆಸುತ್ತದೆ. ಶ್ರೀ ರಾಮಚಂದ್ರ ಕೃಪಾಪೋಷಿತ ಯಕ್ಷಗಾನ ಮಂಡಳಿಯು ಶ್ರೀಮಠದ ಮಗುವಿದ್ದ ಹಾಗೆ ಎಂದು ಹೊಸನಗರ ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ನುಡಿದರು.
ಅವರು ಸೋಮವಾರ ಮಾಣಿ ಶ್ರೀ ರಾಮಚಂದ್ರಾಪುರ ಮಠದಲ್ಲಿ ಶ್ರೀ ರಾಮಚಂದ್ರ ಕೃಪಾಪೋಷಿತ ಯಕ್ಷಗಾನ ಮಂಡಳಿಯ ಎಂಟನೇ ವರ್ಷದ ತಿರುಗಾಟದ ಪ್ರಾರಂಭೋತ್ಸವದಲ್ಲಿ ಆಶೀರ್ವಚನ ನೀಡಿದರು.
ಮೇಳವು 8ನೇ ವರ್ಷದ ತಿರುಗಾಟಕ್ಕೆ ಸಮಗ್ರವಾಗಿ ಬೆಳೆದು ನಿಂತಿದೆ ಮತ್ತು ಮಾತೃ ಸಂಸ್ಥೆಗೆ ದೊಡ್ಡ ಸೇವೆಯನ್ನು ನೀಡಲು ಸಿದ್ಧವಾಗಿದೆ. ಮೇಳದ ಎಂಟನೇ ವರ್ಷದ ಸಂಚಾರದಲ್ಲಿ ಬರುವ ಆದಾಯದಿಂದ ಮಠ ಮತ್ತು ಸಭಾಭವನದ ಮಧ್ಯೆ ಹೊಸ ಶಾಶ್ವತ ಭವನದ ನಿರ್ಮಾಣ ಮಾಡಲಿದೆ ಎನ್ನುವುದು ದೊಡ್ಡ ಕೊಡುಗೆಯಾಗಿದೆ ಎಂದರು.
ಈ ವರ್ಷದ ಸಂಚಾರದಲ್ಲಿ ಮೇಳ ದಿಗ್ವಿಜಯ ಸಾಧಿಸಿಕೊಂಡು ಮರಳಲಿ ಮತ್ತು ಕಲೆ ಸಮರ್ಥ ಮಾಧ್ಯಮವಾಗಿ ಉತ್ತಮ ಸಂದೇಶ ರವಾನೆಯಾಗಲಿ ಎಂದು ಹರಸಿದರು.
ಶ್ರೀ ಸೀತಾರಾಮಚಂದ್ರ ಚಂದ್ರಮೌಳೀಶ್ವರ ಶ್ರೀ ರಾಜರಾಜೇಶ್ವರೀ ದೇವತಾ ಸನ್ನಿಧಿಯಲ್ಲಿ ಶ್ರೀಗಳ ಉಪಸ್ಥಿತಿಯಲ್ಲಿ ಗೆಜ್ಜೆಪೂಜೆ ನಡೆಯಿತು. ಟಿ. ಶ್ಯಾಮ್ ಭಟ್, ಪೆರಾಜೆ ಮಠದ ಆಡಳಿತ ಸಮಿತಿ ಅಧ್ಯಕ್ಷ ಹಾರಕರೆ ನಾರಾಯಣ ಭಟ್, ಹರಿಪ್ರಸಾದ್ ಪೆರಿಯಾಪ್ಪು, ಹಿರಿಯ ಯಕ್ಷಗಾನ ಕಲಾವಿದರಾದ ಸೂರಿಕುಮೇರು ಗೋವಿಂದ ಭಟ್, ಪಾತಾಳ ವೆಂಕಟ್ರಮಣ ಭಟ್, ಹೊಸಮೂಲೆ ಗಣೇಶ್ ಭಟ್, ಪುತ್ತಿಗೆ ರಘುರಾಮ ಹೊಳ್ಳ, ಮೇಳದ ವ್ಯವಸ್ಥಾಪಕರಾದ ದಿವಾಕರ ಕಾರಂತ, ಸುಬ್ರಾಯ ಹೊಳ್ಳ, ಪ್ರಸಂಗ ರಚನೆಕಾರ ತಾರಾನಾಥ ವರ್ಕಾಡಿ, ಕಲಾವಿದರಾದ ಪದ್ಯಾಣ ಗಣಪತಿ ಭಟ್, ರವಿಚಂದ್ರ ಕನ್ನಡಿಕಟ್ಟೆ, ಪದ್ಯಾಣ ಶಂಕರನಾರಾಯಣ ಭಟ್, ಪದ್ಯಾಣ ಜಯರಾಮ ಭಟ್, ಅಡೂರು ಹರೀಶ್ ರಾವ್, ಚೈತನ್ಯಕೃಷ್ಣ ಪದ್ಯಾಣ ಉಪಸ್ಥಿತರಿದ್ದರು.
ಮೇಳದ ಪರವಾಗಿ ಹಿರಣ್ಯ ವೆಂಕಟೇಶ್ವರ ಭಟ್ ಪ್ರಾಸ್ತಾವಿಕ ಮಾತನಾಡಿದರು. ಮೊದಲ ಸೇವೆಯಾಟದಲ್ಲಿ 'ಇಕ್ಷಾ$Ìಕು ವಂಶವರ್ಧನ' ಎಂಬ ಪ್ರಸಂಗ ಪ್ರದರ್ಶನಗೊಂಡಿತು
|
|
|